Slide
Slide
Slide
previous arrow
next arrow

ರಸ್ತೆ ದುರಸ್ತಿಗೆ ಸಾರ್ವಜನಿಕರಿಂದ ಆಗ್ರಹ

300x250 AD

ದಾಂಡೇಲಿ: ನಗರದ ಹಳೆದಾಂಡೇಲಿಯಿಂದ ಬಸ್ ಡಿಪೋವರೆಗೆ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯ ಸಾರ್ವಜನಿಕರು ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.

ಬೃಹತ್ ನಿರಾವರಿ ಯೋಜನೆಗಳ ಪೈಪ್ ಲೈನ್ ಕಾಮಗಾರಿ ಮತ್ತು ಯುಜಿಡಿ ಕಾಮಗಾರಿಗಳಿಂದ ಉತ್ತಮವಾಗಿದ್ದ ರಸ್ತೆ ಇದೀಗ ಹೊಂಡ ಗುಂಡಿಗಳ ಮೂಲಕ ಸಾರ್ವಜನಿಕರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಇಲ್ಲಿ ಶಾಲೆ ಕಾಲೇಜುಗಳಿಗೆ ಹಾಗೂ ಸೈಯದ್ ಅಬಿದ್ ಸಭಾಭವನಕ್ಕೆ ಹೋಗಬೇಕಾದರೆ ಹರಸಾಹಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ತಿಂಗಳ ಹಿಂದೆ ದುರಸ್ತಿ ಮಾಡಿದ ಈ ರಸ್ತೆ ಇದೀಗ ಮೂರು ಕಾಸಿಗೆ ಹರಾಜಾಗುವಂತಾಗಿದೆ.

300x250 AD

ಆದ್ದರಿಂದ ಈ ಕೂಡಲೇ ಈ ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕಾಗಿ ಸ್ಥಳೀಯರಾದ ಸಮೀರ್ ಶೇಖ್, ಮುಕ್ತಿಯಾರ್, ಸೆಲ್ವಾ ತಂಬಿ ಶೆಡ್ರಕ್, ರೋಹನ್ ಮೊದಲಾದವರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Share This
300x250 AD
300x250 AD
300x250 AD
Back to top